Skip to main content

Posts

Showing posts from March, 2024

ದ್ರೌಪದಿಯ ಪಾತ್ರೆ !

ಲಸಂಸ್ಕಾರ  >  ಸಣ್ಣ ನೀತಿ ಕಥೆಗಳು  >  ಇತರ ಕಥೆಗಳು  >  ದ್ರೌಪದಿಯ ಪಾತ್ರೆ ! ದ್ರೌಪದಿಯ ಪಾತ್ರೆ ಬಾಲಮಿತ್ರರೇ, ನಿಮಗೆ ಮಹಾಭಾರತದ ಕೌರವರು ಹಾಗೂ ಪಾಂಡವರ ಬಗ್ಗೆ ತಿಳಿದಿರಬಹುದು. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು. ಹಾಗೂ ಅವರನ್ನು ೧೨ ವರ್ಷಗಳ ವನವಾಸ ಹಾಗೂ ೧ ವರ್ಷದ ಅಜ್ಞಾತವಾಸಕ್ಕಾಗಿ ಕಳಿಸಿದರು. ಈ ವಿಷಯ ಪಾಂಡವರ ವನವಾಸದ ಸಮಯದ್ದಾಗಿದೆ. ಕುರುಡನಾಗಿದ್ದ ಧೃತರಾಷ್ಟ್ರನು ಹಸ್ತಿನಾಪುರದ ರಾಜನಾಗಿದ್ದನು. ಇದರಿಂದಾಗಿ ದೃತರಾಷ್ಟ್ರನ ಮಗ ದುರ್ಯೋಧನನ ಕೈಯಲ್ಲಿ ರಾಜ್ಯದ ಕಾರ್ಯಭಾರವಿತ್ತು. ಒಂದು ಬಾರಿ ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಕೌರವರ ದರಬಾರಿಗೆ ಬಂದರು. ಮಹರ್ಷಿ ದೂರ್ವಾಸರು ಮುಂಗೋಪಿ ಎಂದು ತ್ರಿಲೋಕದಲ್ಲಿ ಎಲ್ಲರಿಗೂ ತಿಳಿದಿತ್ತು. ಮಹರ್ಷಿ ದೂರ್ವಾಸರ ಎದುರು ಏನಾದರೂ ಅಯೋಗ್ಯವಾಗಿರುವುದು ಘಟಿಸಿದರೆ ಅಥವಾ ಅವರ ಅನಾದರವಾದರೆ ಅವರು ಕೂಡಲೇ ಸಿಟ್ಟಿಗೊಳಗಾಗುತ್ತಿದ್ದರು. ಹಾಗೂ ಅವರು ಎದುರಿನಲ್ಲಿರುವವನಿಗೆ ಆ ಕ್ಷಣದಲ್ಲೇ ಶಾಪವನ್ನು ಕೊಡುತ್ತಿದ್ದರು. ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಹಸ್ತಿನಾಪುರಕ್ಕೆ ಆಗಮಿಸಿದ್ದರು. ಆದರೆ ದುರ್ಯೋಧನನು ಅವರಿಗೆ ಯೋಗ್ಯವಾದ ಆದರಾತಿಥ್ಯವನ್ನು ಮಾಡಿದನು. ಅವರ ಸ್ನಾನ, ಸಂಧ್ಯಾ, ಭೋಜನ, ನಿದ್ರೆ ಹಾಗೂ ಯೋಗ್ಯ ಆಯೋಜನೆಗಳನ್ನು ಮಾಡಿ ಅವರನ್ನು ಸತ್ಕರಿಸಿದನು. ಅವರಿಗೆ ಯಾವುದೇ ವಿಷಯದ ಕೊರತೆಯು ಅ

ಸಾಮ್ರಾಟ ದಿಲೀಪಸಾಮ್ರಾಟ

ಬಾಲಸಂಸ್ಕಾರ  >  ಸಣ್ಣ ನೀತಿ ಕಥೆಗಳು  >  ರಾಜರ ಕಥೆಗಳು  >  ಸಾಮ್ರಾಟ ದಿಲೀಪ ಸಾಮ್ರಾಟ ದಿಲೀಪ ಮಿತ್ರರೇ, ಇದು ರಘುವಂಶದ ಸಾಮ್ರಾಟ ದಿಲೀಪನ ಕಥೆಯಾಗಿದೆ. ಶ್ರೀರಾಮ ಪ್ರಭುವಿನ ಜನ್ಮವೂ ರಘುವಂಶದಲ್ಲಿಯೇ ಆಯಿತು. ಪ್ರಭು ಶ್ರೀರಾಮನ ಜನ್ಮದ ಮೊದಲು ರಘುವಂಶದಲ್ಲಿ ಸಾಮ್ರಾಟ್ ದಿಲೀಪನೆಂಬ ಒಬ್ಬ ಮಹಾನ್ ಚಕ್ರವರ್ತಿ ಇದ್ದರು. ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು. ಗೋವ್ರತದ ಅರ್ಥವೇನೆಂದರೆ, ಗೋವಿನ ಸೇವೆಯನ್ನು ಮಾಡುವುದು, ಅವುಗಳ ರಕ್ಷಣೆ ಮಾಡುವುದು. ತಮ್ಮ ಕುಲಗುರು ವಸಿಷ್ಠರ ಪೂಜ್ಯ ಗೋವು ನಂದಿನಿಯ ಸೇವೆಯನ್ನು ಮಾಡುತ್ತಿದ್ದನು. ಅವರು ನಂದಿನಿ ಹಸುವಿಗೆ ಎಳೆಯ ಹಸಿ ಹುಲ್ಲು ತಿನ್ನಿಸುತ್ತಿದ್ದನು, ಪ್ರೀತಿಯಿಂದ ಅದರ ಬೆನ್ನು ಮತ್ತು ಕುತ್ತಿಗೆಯನ್ನು ಸವರುತ್ತಿದ್ದನು; ಅದರ ಮೇಲೆ ಕುಳಿತುಕೊಳ್ಳುವ ಸೊಳ್ಳೆ- ನೊಣಗಳನ್ನು ಓಡಿಸುತ್ತಿದ್ದ. ನಂದಿನಿಯೊಂದಿಗೆ ಯಾವಾಗಲೂ ನೆರಳಿನಂತೆ ಇರುತ್ತಿದ್ದ. ಅದು ಕುಳಿತರೆ ಕುಳಿತುಕೊಳ್ಳುತ್ತಿದ್ದ, ಮತ್ತು ನಡೆಯತೊಡಗಿದರೆ ನಡೆಯುತ್ತಿದ್ದ. ಒಂದು ದಿನ ಆ ನಂದಿನಿ ಹಸುವನ್ನು ಅರಣ್ಯದಲ್ಲಿ ಮೇಯಿಸಲು ಕರೆದುಕೊಂಡು ಹೋದನು. ಅರಣ್ಯದಲ್ಲಿ ಮೇಯಿಸುತ್ತಿರುವಾಗ, ಅಕಸ್ಮಿಕವಾಗಿ ಒಂದು ಬೃಹದಾಕಾರದ ಮಹಾಕ್ರೂರ ಸಿಂಹ ಸಾಮ್ರಾಟನ ಎದುರಿಗೆ ಬಂದು ನಿಂತಿತು. ಆ ಸಿಂಹವು ನಂದಿನಿ ಹಸುವನ್ನು ನೋಡಿತು ಮತ್ತು ಅದು ನಂದಿನಿಯನ್ನು ತಿನ್ನಲು ಅದರ ಮೇಲೆರೆಗುವುದರಲ್ಲಿತ್ತು. ರಾಜನು

ರಾಷ್ಟ್ರೀಯ ಜಾನುವಾರು ಮಿಷನ್: ಕೋಳಿ,ಕುರಿ ಹಂದಿ ಘಟಕ ಸ್ಥಾಪನೆಗೆ ಶೇ 50% ಸಹಾಯಧನ.!

ರಾಷ್ಟ್ರೀಯ ಜಾನುವಾರು ಮಿಷನ್: ಕೋಳಿ,ಕುರಿ ಹಂದಿ ಘಟಕ ಸ್ಥಾಪನೆಗೆ ಶೇ 50% ಸಹಾಯಧನ.! ಈ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ ಹಾಗೂ ಹಂದಿ ಸಾಕಾಣಿಕೆ & ರಸಮೇವು ಉತ್ಪಾದನೆ ಘಟಕವನ್ನು ಪ್ರಾರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆ ಅಡಿಯಲ್ಲಿ ಆರ್ಥಿಕ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಪಶುಸಂಗೋಪನೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. NLM Scheme-2024: ಸಹಾಯಧನದ ವಿವರ 1) ಗ್ರಾಮೀಣ ಕೋಳಿ industry(1000 ದೇಶಿ ಮಾತೃಕೋಳಿ ಘಟಕ, ಹ್ಯಾಚರಿ ಘಟಕ,ಮರಿಗಳ ಸಾಕಾಣಿಕೆ ಘಟಕ)- ಯೋಜನೆಯ ಗರಿಷ್ಥ ವೆಚ್ಚ:- 50 ಲಕ್ಷ, ಸಹಾಯಧನ:- ಶೇ 50% ರಷ್ಟು 1 ಘಟಕಕ್ಕೆ ಗರಿಷ್ಟ ₹ 25 ಲಕ್ಷ. 2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ 500 ಘಟಕಕ್ಕೆ ಯೋಜನೆಯ ವೆಚ್ಚ 1 ಕೋಟಿ – 50% ಸರ್ಕಾರದ ಸಬ್ಸಿಡಿ (50 ಲಕ್ಷ ಸಿಗಲಿದೆ) 400 ಘಟಕಕ್ಕೆ ಯೋಜನೆಯ ವೆಚ್ಚ  80 ಲಕ್ಷ – 50% ಸರ್ಕಾರದ ಸಬ್ಸಿಡಿ (40 ಲಕ್ಷ) 300 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ – 50% ಸರ್ಕಾರದ ಸಬ್ಸಿಡಿ (30 ಲಕ್ಷ) 200 ಘಟಕಕ್ಕೆ ಯೋಜನೆಯ ವೆಚ್ಚ 40 ಲಕ್ಷ – 50% ಸರ್ಕಾರದ ಸಬ್ಸಿಡಿ (20 ಲಕ್ಷ) 100 ಘಟಕಕ್ಕೆ ಯೋಜನೆಯ ವೆಚ್ಚ 20 ಲಕ್ಷ – 50% ಸರ್ಕಾರದ ಸಬ್ಸಿಡಿ (10 ಲಕ್ಷ) 3) ಹಂದಿ ತಳಿ ಸಂವರ್ಧನಾ ಘಟಕ  100+10 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ -50% ಸರ್ಕಾರದ ಸಬ್ಸಿಡ